BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳSample

ಅನೇಕ ಯಹೂದಿಗಳು ತಮ್ಮ ಮೆಸ್ಸೀಯನಿಗೆ ನಿರ್ದಿಷ್ಟ ನಿರೀಕ್ಷೆಗಳನ್ನು ಹೊಂದಿದ್ದರು. ತಮ್ಮ ವಾಗ್ದಾನದರಾಜನು ಸಿಂಹಾಸದಲ್ಲಿ ಕುಳಿತು ರೋಮನ್ ದಬ್ಬಾಳಿಕೆಯಿಂದ ಅವರನ್ನು ರಕ್ಷಿಸುತ್ತಾನೆ ಎಂದು ಅವರು ಭಾವಿಸಿದ್ದರು. ಆದ್ದರಿಂದ ಯೇಸು ಬಂದು ಸಮಾಜದ ಬಹಿಷ್ಕಾರಗಳೊಂದಿಗೆ ಸಹವಾಸ ಮಾಡಲು ಮತ್ತು ದೇವರ ರಾಜ್ಯವನ್ನು ವಿನಮ್ರವಾಗಿ ಘೋಷಿಸಲು ಪ್ರಾರಂಭಿಸಿದಾಗ, ಕೆಲವರು ಅವನನ್ನು ಮೆಸ್ಸೀಯನೆಂದು ಗುರುತಿಸದೆ ಆತನ ಆಡಳಿತವನ್ನು ಹಿಂಸಾತ್ಮಕವಾಗಿ ವಿರೋಧಿಸಿದರು. ವಿಪರ್ಯಾಸವೆಂದರೆ, ಯೇಸುವಿನ ಆಡಳಿತವನ್ನು ಸ್ಥಾಪಿಸಲು ದೇವರು ಬಳಸಿದ ಸಾಧನವೇ ಅವರ ವಿರೋಧ, ಮತ್ತು ಶಿಲುಬೆಗೇರಿಸುವಿಕೆ, ಪುನರುತ್ಥಾನ ಮತ್ತು ಆರೋಹಣದ ಮೂಲಕ ಯೇಸುವನ್ನು ಯಹೂದಿಗಳ ಮತ್ತು ಎಲ್ಲಾ ರಾಷ್ಟ್ರಗಳ ರಾಜನಾಗಿ ಸ್ವರ್ಗದಲ್ಲಿ ಸಿಂಹಾಸನಾರೋಹಣ ಮಾಡಲಾಯಿತು. ಈ ಮುಂದಿನ ವಿಭಾಗದಲ್ಲಿ, ಥೆಸಲೋನಿಕ, ಬೆರೋಯ ಮತ್ತು ಅಥೇನೆನಲ್ಲಿ ಈ ಸಂದೇಶವನ್ನು ಬೋಧಿಸುವ ಪೌಲನ ಅನುಭವವನ್ನು ಲೂಕನು ಹೇಳುತ್ತಾನೆ.
ಥೆಸಲೋನಿಕದಲ್ಲಿದ್ದಾಗ, ಪ್ರವಾದಿಗಳು ಯಾವಾಗಲೂ ಮೆಸ್ಸೀಯನು ಪುನಃ ರಾಜನಾಗಿ ಆಳ್ವಿಕೆ ನಡೆಸಲು ಶ್ರಮಪಟ್ಟು ಮತ್ತೆ ಮೇಲಕ್ಕೆ ಏಳಬೇಕು ಎಂದು ಹೇಳಿದರು ಎಂದು ಪೌಲನು ಇಬ್ರಿಯಾ ಧರ್ಮಗ್ರಂಥಗಳಿಂದ ನಿರೂಪಿಸಿದನು. ಪ್ರಾಚೀನ ಪ್ರವಾದಿಯ ವಿವರಣೆಗೆ ಯೇಸು ಸರಿಹೊಂದುತ್ತಾರೆ ಎಂದು ಪೌಲನು ಗಮನಸೆಳೆದನು, ಮತ್ತು ಅನೇಕರು ಮನವೊಲಿಸಿದರು. ಪೌಲನ ಪ್ರೇಕ್ಷಕರು ಹೆಚ್ಚಾಗುತ್ತಿದ್ದಂತೆ, ಕೆಲವು ಅಸೂಯೆ ಪಟ್ಟ ಯಹೂದಿಗಳು ಪೌಲನು ಇಡೀ ಜಗತ್ತನ್ನು ತಲೆಕೆಳಗಾಗಿ ತಿರುಗಿಸಿ ಹೊಸ ರಾಜನನ್ನು ಘೋಷಿಸಿದನೆಂದು ಆರೋಪಿಸಿ ನಗರದಲ್ಲಿನ ಪ್ರಭಾವಶಾಲಿಗಳನ್ನು ಸಂಗ್ರಹಿಸಿದರು. ರೋಮ ವಸಾಹತುಗಳು ಚಕ್ರವರ್ತಿಯನ್ನು ಅಸಮಾಧಾನಗೊಳಿಸಲು ಬಯಸಲಿಲ್ಲ, ಆದ್ದರಿಂದ ಇದು ಬಹಳ ಗಂಭೀರವಾದ ಆರೋಪವಾಗಿದ್ದು ಅದು ಪೌಲನನ್ನು ಕೊಲ್ಲಬಹುದು. ಯೇಸುವಿನ ರಾಜ್ಯದ ಸುವಾರ್ತೆಯನ್ನು ಬದಲಾಗಿ ಬೆರಿಯಾ ನಗರಕ್ಕೆ ಬೋಧಿಸಲು ಪೌಲನನ್ನು ಥೆಸಲೋನಿಕದಿಂದ ಕಳುಹಿಸಲಾಯಿತು. ಅಲ್ಲಿರುವಾಗ, ಕೇಳಲು, ಅಧ್ಯಯನ ಮಾಡಲು ಮತ್ತು ತನ್ನ ಸಂದೇಶವು ಇಬ್ರಿಯಾ ಧರ್ಮಗ್ರಂಥಗಳೊಂದಿಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳಲು ಉತ್ಸುಕನಾಗಿದ್ದ ಪುರುಷರು ಮತ್ತು ಮಹಿಳೆಯರನ್ನು ಪೌಲನು ಕಂಡುಕೊಂಡನು. ಬೆರೋಯದಲ್ಲಿ ಅನೇಕರು ಯೇಸುವನ್ನು ಹಿಂಬಾಲಿಸತೊಡಗಿದರು, ಆದರೆ ಥೆಸಲೋನಿಕಾದ ಯಹೂದಿ ಪುರುಷರು ಬೆರೋಯಗೆ ಅವನನ್ನು ಅಲ್ಲಿಂದಲೂ ಹೊರಗೆ ಹಾಕಲು ಹೋದಾಗ ಪೌಲನ ಕಾರ್ಯ ಮೊಟಕುಗೊಂಡಿತು. ಇದು ಪೌಲನು ಅಥೇನೆಗೆ ತೆರಳಲು ಕಾರಣವಾಯಿತು, ಅಲ್ಲಿ ಅವನು ತಮ್ಮ “ಅಪರಿಚಿತ ದೇವರ” ನಿಜವಾದ ಗುರುತು ಮತ್ತು ಯೇಸುವಿನ ಪುನರುತ್ಥಾನದ ಮಹತ್ವವನ್ನು ವಿವರಿಸಲು ವಿಚಾರಗಳ ಕೇಂದ್ರ ಮಾರುಕಟ್ಟೆಯನ್ನು ಪ್ರವೇಶಿಸಿದನು.
ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ :
• ಪೌಲನು ಜಗತ್ತನ್ನು ತಲೆಕೆಳಗಾಗಿ ಮಾಡಿದನೆಂದು ಯಹೂದಿಗಳು ಆರೋಪಿಸಿದರು. ಲೌಕಿಕ ಸಾಮ್ರಾಜ್ಯಗಳ ದುರಾಸೆಯ ಮೌಲ್ಯಗಳಿಗೆ ಆದ್ಯತೆ ನೀಡುವವರಿಗೆ, ತಲೆಕೆಳಗಾದ ಸಾಮ್ರಾಜ್ಯದ ಸಂದೇಶವು ಅಸಮಾಧಾನವನ್ನುಂಟುಮಾಡುತ್ತದೆ. ಆದರೆ ಯೇಸುವಿನ ಮಾರ್ಗಗಳು ಜಗತ್ತನ್ನು ಹಾಳುಮಾಡುವ ಸ್ವ-ಕೇಂದ್ರಿತ ಮೌಲ್ಯಗಳನ್ನು ಮಾತ್ರ ಅಸಮಾಧಾನಗೊಳಿಸುತ್ತವೆ. ಉದಾಹರಣೆಗೆ, ಈ ಜಗತ್ತಿನಲ್ಲಿ ಪರಿಹಾರವನ್ನು ಪಡೆಯಬೇಕಾದ ಒಂದು ವಿಷಯ ಯಾವುದು? ಯೇಸುವಿನ ಮೌಲ್ಯಗಳು ಮತ್ತು ಬೋಧನೆಗಳನ್ನು ಅನುಸರಿಸುವುದು ಅಲ್ಲಿ ಪುನಃಸ್ಥಾಪನೆಯನ್ನು ಹೇಗೆ ತರುತ್ತದೆ? ಅದನ್ನು ಸಾಧಿಸುವುದನ್ನು ನೋಡಲು ಯಾವ ಸ್ವಾರ್ಥಿ ಮೌಲ್ಯಗಳನ್ನು ತಲೆಕೆಳಗಾಗಿ ಮಾಡಬೇಕಾಗುತ್ತದೆ?
• ಅಪೊಸ್ತಲರ ಕೃತ್ಯಗಳ 17: 11-12ಅನ್ನು ಮರುಪರಿಶೀಲಿಸಿ ಯೇಸು ನಿಜವಾಗಿಯೂ ಮೆಸ್ಸೀಯನೆಂದು ತೀರ್ಮಾನಿಸಲು ಸಹಾಯ ಮಾಡಿಲು ಬೆರಿಯನ್ನರು ಮಾಡಿದ ಎರಡು ಅನುಕರಣೀಯ ಕೆಲಸಗಳು ಯಾವುವು? ವ್ಯಕ್ತಿಯ ವರ್ತನೆ ಮತ್ತು ಕಾರ್ಯಗಳಲ್ಲಿ ಈ ಎರಡು ವಿಷಯಗಳಲ್ಲಿ ಒಂದನ್ನು ಮಾತ್ರ ಸಕ್ರಿಯಗೊಳಿಸಿದರೆ ಏನಾಗುತ್ತದೆ ಎಂದು ನೀವು ಭಾವಿಸುತ್ತೀರಿ? ಈ ಎರಡೂ ವರ್ತನೆಗಳು ಮತ್ತು ಕಾರ್ಯಗಳಲ್ಲಿ ನೀವು ಬೆಳೆಯುವುದು ಪ್ರಾಯೋಗಿಕವಾಗಿ ಹೇಗಿರುತ್ತದೆ?
• ಅಥೇನೆನಲ್ಲಿ ಪೌಲನ ಸಂದೇಶವನ್ನು ಎಚ್ಚರಿಕೆಯಿಂದ ಪರಿಶೀಲಿಸಿ.ಮಾನವೀಯತೆಯೊಡನೆ ದೇವರ ಸಾಮೀಪ್ಯ ಮತ್ತು ಸಂಬಂಧದ ಬಗ್ಗೆ ಅವನು ಏನು ಹೇಳುತ್ತಾನೆ? ಮಾನವೀಯತೆಯ ಗುರುತು ಮತ್ತು ಉದ್ದೇಶದ ಬಗ್ಗೆ ಪೌಲನು ಏನು ಹೇಳುತ್ತಾನೆ? ಯೇಸುವಿನ ಬಗ್ಗೆ ಅವನು ಏನು ಹೇಳುತ್ತಾನೆ? ಪೌಲನ ಸಂದೇಶವು ಇಂದು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
• ನಿಮ್ಮ ಪ್ರತಿಫಲಗನನ್ನು ಒಂದು ಪ್ರಾರ್ಥನೆಯನ್ನಾಗಿ ಮಾಡಿ. ನಿಮ್ಮನ್ನು ಸೃಷ್ಟಿಸಿದಕ್ಕಾಗಿ ದೇವರಿಗೆ ಧನ್ಯವಾದ ನೀಡಿರಿ. ಅವರನ್ನು ನಮಗೆ ತಿಳಿಸಿ ನಮಗೆ ಹತ್ತಿರವಾಗಿಸಿದಕ್ಕಾಗಿದೇವರಿಗೆ ಧನ್ಯವಾದ ನೀಡಿ. ಮತ್ತು ಅವರ ಬಗ್ಗೆ ಮತ್ತು ಅವರ ರಾಜ್ಯದ ಪುನಃಸ್ಥಾಪಿಸುವ ಶಕ್ತಿಯ ಬಗ್ಗೆ ತಿಳಿಯಲು ಧರ್ಮಗ್ರಂಥಗಳನ್ನು ಅಧ್ಯಯನ ಮಾಡಲು ಹೊಸ ವಾತ್ಸಲ್ಯ, ಗಮನ ಮತ್ತು ಪರಿಶ್ರಮಕ್ಕಾಗಿ ಅವರನ್ನು ಬೇಡಿ.
Scripture
About this Plan

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್ಸೈಡ್-ಡೌನ್ ಕಿಂಗ್ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್ರತಿಫಲಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಇದು ಭಾಗವಹಿಸುವವರಿಗೆ ಯೇಸುವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಲೇಖಕರ ಅದ್ಭುತ ಸಾಹಿತ್ಯ ವಿನ್ಯಾಸ ಮತ್ತು ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳುತ್ತದೆ.
More
Related Plans

Trusting God in the Unexpected

Building Multicultural Churches

Hear

I Don't Even Like Women

21 Days of Fasting and Prayer - Heaven Come Down

The Wonder of Grace | Devotional for Adults

Hard Fought Hallelujah: A 7-Day Study to Finding Faith in the Fight

The Otherness of God

Filled, Flourishing and Forward
