YouVersion Logo
Search Icon

ಲೂಕ. ಮುನ್ನುಡಿ

ಮುನ್ನುಡಿ
ಪ್ರಭು ಯೇಸು ಇಸ್ರಯೇಲ್ ಜನತೆಯ ವಾಗ್ದತ್ತ ರಕ್ಷಕ ಮಾತ್ರವಲ್ಲ, ಇಡೀ ಮಾನವಕುಲದ ಉದ್ಧಾರಕ. ಈ ಸತ್ಯವೇ ಲೂಕನ‍ ಶುಭಸಂದೇಶಕ್ಕೆ ಪ್ರಧಾನ. “ದೀನದಲಿತರಿಗೆ ಶುಭಸಂದೇಶವನ್ನು ಸಾರಲು ಯೇಸು ಪವಿತ್ರಾತ್ಮರಿಂದ ಅಭಿಷಿಕ್ತರಾದವರು,” ಎಂಬುದನ್ನು ಇದರಲ್ಲಿ ಒತ್ತಿ ಹೇಳಲಾಗಿದೆ. ಬಗೆಬಗೆಯ ಕುಂದುಕೊರತೆಗಳಿಂದ ಬಳಲುತ್ತಿರುವ ಜನತೆಯ ಬಗ್ಗೆ ಕರುಣೆ ಹಾಗೂ ಅನುಕಂಪದಿಂದ ತುಂಬಿತುಳುಕುತ್ತದೆ ಈ ಸಂದೇಶ.
ಶಾಂತಿಸಂತಸಕ್ಕೂ ಇದರಲ್ಲಿ ಸಾಕಷ್ಟು ಪ್ರಾಮುಖ್ಯತೆ ಕೊಡಲಾಗಿದೆ. ಕ್ರಿಸ್ತೇಸುವಿನ ಆಗಮನ ಮತ್ತು ಆರೋಹಣವನ್ನು ಬಣ್ಣಿಸುವ ಮೊದಲನೆಯ ಹಾಗೂ ಕೊನೆಯ ಅಧ್ಯಾಯಗಳಲ್ಲಿ ಈ ಗುಣ ಗಣಗಣಿಸುತ್ತದೆ.
ಯೇಸುಸ್ವಾಮಿ ಸ್ವರ್ಗಾರೋಹಣವಾದ ಮೇಲೆ ಕ್ರೈಸ್ತವಿಶ್ವಾಸ ಹಾಗೂ ಶ್ರದ್ಧೆ ಹೇಗೆ ಹಬ್ಬಿಹರಡಿತೆಂಬುದನ್ನು ಲೇಖಕ ಲೂಕನು, “ಪ್ರೇಷಿತರ ಕಾರ್ಯಕಲಾಪಗಳು” ಎಂಬ ತನ್ನ ಮತ್ತೊಂದು ಕೃತಿಯಲ್ಲಿ ಸವಿಸ್ತಾರವಾಗಿ ನಿರೂಪಿಸಿದ್ದಾನೆ.
ಸ್ನಾನಿಕ ಯೊವಾನ್ನನ ಮತ್ತು ಯೇಸುವಿನ ಜನನ ಹಾಗೂ ಬಾಲ್ಯಗಳ ವೃತ್ತಾಂತವನ್ನು ಈ ಕೃತಿಯಲ್ಲಿ ಮಾತ್ರ ಕಾಣಬಹುದು. ಅಂತೆಯೇ ಯೇಸು ಗಲಿಲೇಯದಿಂದ ಜೆರುಸಲೇಮಿಗೆ ಕೈಗೊಂಡ ಪ್ರಯಾಣದಲ್ಲಿ ಸಂಭವಿಸಿದ ಘಟನೆಗಳ ಕ್ರಮಬದ್ಧ ವರದಿಗೆ ಈ ಕೃತಿ ಅಗತ್ಯ. ದೇವದೂತರ ಗಾನ, ಕುರುಬರ ಭೇಟಿ, ದೇವಾಲಯದಲ್ಲಿ ಬಾಲಕ ಯೇಸುವಿನ ಸಂವಾದ, ಸದಯ ಸಮಾರಿತ, ದುಂದುಗಾರ ಮಗ, ಈ ಮುಂತಾದ ಸಾಧನೆ ಬೋಧನೆಗಳು ಮಿಕ್ಕ ಮೂರು ಶುಭಸಂದೇಶಗಳಲ್ಲಿ ದೊರಕವು. ಪ್ರಾರ್ಥನೆ, ಪವಿತ್ರಾತ್ಮ, ಯೇಸುವಿನ ಸೇವಾವೃತ್ತಿಯಲ್ಲಿ ಮಹಿಳೆಯರ ಪಾತ್ರ ಮತ್ತು ಪಾಪಪರಿಹಾರ ಇವು ಈ ಶುಭಸಂದೇಶದ ವೈಶಿಷ್ಟ್ಯವೆನ್ನಬಹುದು.
ಪರಿವಿಡಿ
ಪೀಠಿಕೆ 1:1-4
ಸ್ನಾನಿಕ ಯೊವಾನ್ನನ ಮತ್ತು ಯೇಸುವಿನ ಜನನ ಹಾಗೂ ಬಾಲ್ಯ 1:5—2:52
ಸ್ನಾನಿಕ ಯೊವಾನ್ನನ ಸೇವಾವೃತ್ತಿ 3:1-20
ಯೇಸು ಪಡೆದ ದೀಕ್ಷಾಸ್ನಾನ ಮತ್ತು ಸೈತಾನನ ಪ್ರಲೋಭನೆಗಳು 3:21—4:13
ಗಲಿಲೇಯದಲ್ಲಿ ಯೇಸುವಿನ ಬಹಿರಂಗ ಸೇವಾವೃತ್ತಿ 4:14—9:50
ಗಲಿಲೇಯದಿಂದ ಜೆರುಸಲೇಮಿಗೆ 9:51—19:27
ಯೇಸುವಿನ ಕೊನೆಯ ದಿನಗಳು - ಜೆರುಸಲೇಮ್ ಮತ್ತು ಪರಿಸರದಲ್ಲಿ 19:28—23:56
ಯೇಸುವಿನ ಪುನರುತ್ಥಾನ, ದಿವ್ಯದರ್ಶನ ಹಾಗೂ ಸ್ವರ್ಗಾರೋಹಣ 24:1-53

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy