BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳಮಾದರಿ

ಪೌಲನು ತನ್ನ ಸಮರ್ಥನೆಯನ್ನು ಮಾಡಲು ಧಾರ್ಮಿಕ ಮುಖಂಡರ ಪರಿಷತ್ತಿನ ಮುಂದೆ ನಿಂತಿದ್ದಾನೆ.ಹಿಂಸಾತ್ಮಕವಾಗಿ ಅಡ್ಡಪಡಿಸಲಾದ ಮತ್ತು ಪ್ರಧಾನ ಯಾಜಕರನ್ನು ಬೇರೋಬ್ಬರೆಂದು ತಪ್ಪಾಗಿ ಗ್ರಹಿಸಲಾದ ನಂತರ, ಪೌಲನು ಏನೂ ಸರಿಯಾಗಿ ನಡೆಯುತ್ತಿಲ್ಲವೆಂದು ನೋಡಿ ಮುಂದೆ ಏನು ಮಾಡಬೇಕೆಂದು ಯೋಚಿಸುತ್ತಾನೆಪರಿಷತ್ತು ಎರಡು ಧಾರ್ಮಿಕ ಪಂಥಗಳಾಗಿ: ಸದ್ದುಕಾಯರು ಮತ್ತು ಫರಿಸಾಯರು ಎಂದು ವಿಂಗಡಿಸಲಾಗಿದೆ ಅವನು ನೋಡುತ್ತಾನೆ. ಸದ್ದುಕಾಯರು ಪುನರುತ್ಥಾನ ಅಥವಾ ದೇವದೂತರ ಆಧ್ಯಾತ್ಮಿಕ ವಾಸ್ತವಗಳನ್ನು ನಂಬುವುದಿಲ್ಲ, ಆದರೆ ಫರಿಸಾಯರು ಕಾನೂನನ್ನು ಹೆಚ್ಚು ಕಟ್ಟುನಿಟ್ಟಾಗಿ ಅರ್ಥೈಸುತ್ತಾರೆ ಮತ್ತು ಸದ್ದುಕಾಯರು ನಿರಾಕರಿಸುವ ಆಧ್ಯಾತ್ಮಿಕ ವಾಸ್ತವಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ.ಪರಿಷತ್ತಿನ ನಡುವಿನ ವಿಭಜನೆಯನ್ನು ಪೌಲನು ತನ್ನಿಂದ ಗಮನವನ್ನು ದೂರವಿರಿಸಲು ಒಂದು ಅವಕಾಶವಾಗಿ ನೋಡುತ್ತಾನೆ ಮತ್ತು ಅವನು ಒಬ್ಬ ಫರಿಸಾಯನೆಂದು ಮತ್ತು ಸತ್ತವರ ಪುನರುತ್ಥಾನದ ವಿಶಯಕ್ಕಾಗಿ ವಿಚಾರಣೆಯಲ್ಲಿದ್ದಾನೆ ಎಂದು ಕೂಗಲು ಪ್ರಾರಂಭಿಸುತ್ತಾನೆ.
ಈ ಸಮಯದಲ್ಲಿ, ದೀರ್ಘಕಾಲದ ಚರ್ಚೆ ಪ್ರಾರಂಭವಾಗುತ್ತದೆ. ಇದು ಮೊದಲಿಗೆ ಕೆಲಸ ಮಾಡುವಂತೆ ತೋರುತ್ತದೆ, ಮತ್ತು ಫರಿಸಾಯರು ಸಹ ಪೌಲನನ್ನು ರಕ್ಷಿಸಲು ಪ್ರಾರಂಭಿಸುತ್ತಾರೆ.ಆದರೆ ಸ್ವಲ್ಪ ಸಮಯದಲ್ಲೇ, ವಿವಾದವು ಎಷ್ಟು ಬಿಸಿಯಾಗಿತ್ತಂದರೆ ಪೌಲನ ಪ್ರಾಣಕ್ಕೆ ಅಪಾಯ ಉಂಟಾಗುವಂತೆ.ಅವನನ್ನು ರೋಮನ್ ಕಮಾಂಡರ್ ಹಿಂಸಾಚಾರದಿಂದ ದೂರವಿರಿಸಿ ಅನ್ಯಾಯವಾಗಿ ಬಂಧಿಸುತ್ತಾನೆ.ಮರುದಿನ ರಾತ್ರಿ ಪುನರುತ್ಥಾನಗೊಂಡ ಯೇಸು ಪೌಲನನ್ನು ಪ್ರೋತ್ಸಾಹಿಸಲು ಪಕ್ಕದಲ್ಲಿ ನಿಂತು ಪೌಲನು ಯೇಸುವಿನ ಉದ್ದೇಶವನ್ನು ರೋಮ್ಗೆ ತರುತ್ತಾನೆಂದು ಹೇಳುತ್ತಾನೆ.ಆದುದರಿಂದ, ಬೆಳಿಗ್ಗೆ, 40 ಕ್ಕೂ ಹೆಚ್ಚು ಯಹೂದಿಗಳು ಅವನನ್ನು ಹೊಂಚುಹಾಕಿ ಕೊಲ್ಲಲು ಸಂಚು ಹೂಡುತ್ತಿದ್ದಾರೆಂದು ಹೇಳಲು ಪೌಲನ ಸೋದರಳಿಯನುಭೇಟಿ ನೀಡಿದಾಗ, ಅವನನ್ನು ಲಂಗರು ಹಾಕಲು ಪೌಲನಿಗೆ ಹೆಚ್ಚಿನ ಸಮಾಧಾನವಿದೆ.ಪೌಲನ ಧ್ಯೇಯವನ್ನು ಕೊನೆಗೊಳಿಸಲು ಹೊಂಚುದಾಳಿ ಯಶಸ್ವಿಯಾಗುವುದಿಲ್ಲ.ಯೇಸು ಹೇಳಿದಂತೆ ರೋಮ್ ನೋಡಲು ಅವನು ಜೀವಿಸುವನು.ಖಚಿತವಾಗಿ ಪಿತೂರಿಯನ್ನು ಅಡ್ಡಿಪಡಿಸಲು ಎಚ್ಚರಿಕೆ ಸಮಯಕ್ಕೆ ಕಮಾಂಡರ್ ಅನ್ನು ತಲುಪುತ್ತದೆ.ತನ್ನ ಸುರಕ್ಷಿತ ಆಗಮನವನ್ನು ಖಚಿತಪಡಿಸಿಕೊಳ್ಳಲು ಪೌಲನನ್ನು 400 ಕ್ಕೂ ಹೆಚ್ಚು ತರಬೇತಿ ಪಡೆದ ಪುರುಷರೊಂದಿಗೆ ಕೈಸರೈಕ್ಕೆ ಕಳುಹಿಸಲಾಗುತ್ತಾನೆ
ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ :
• ಕೆಲವೊಮ್ಮೆ ಯೇಸು ತನ್ನ ಜನರನ್ನು ಕಷ್ಟದಿಂದ ಹೊರಹಾಕುತ್ತಾರೆ ಮತ್ತು ಕೆಲವೊಮ್ಮೆ ಅವರು ಅದರ ಮಧ್ಯದಲ್ಲಿಯೇ ಭೇಟಿಯಾಗುತ್ತಾರೆ. ಪೌಲನು ತನ್ನ ಅಸಾಮಾನ್ಯ ಪರೀಕ್ಷೆಯ ಮಧ್ಯೆ ಯೇಸುವಿನ ಉಪಸ್ಥಿತಿಯನ್ನು ಅಸಾಧಾರಣ ರೀತಿಯಲ್ಲಿ ಅನುಭವಿಸಿದನು.ಆದರೆ ಯೇಸುವಿನ ಎಲ್ಲಾ ಹಿಂಬಾಲಕರು ಅವರನ್ನು ನೋಡಿದರೂ ಅನುಭವಿಸಿದರೂ ಇಲ್ಲದಿದ್ದರೂ ಸಹ, ಯೇಸು ಅವರೊಂದಿಗೆ ಇದ್ದಾರೆ ಮತ್ತು ಎಂದಿಗೂ ತಮ್ಮನ್ನು ಕೈ ಬಿಡುವುದಿಲ್ಲ ಎಂಬ ದೈನಂದಿನ ಭರವಸೆಯನ್ನು ಹೊಂದಿದ್ದಾರೆ (ಮತ್ತಾಯ 28:20).ನೀವು ಇದನ್ನು ಪ್ರತಿಫಲಿಸುವಾಗ ಯಾವ ಆಲೋಚನೆಗಳು ಮತ್ತು ಭಾವನೆಗಳು ಬರುತ್ತವೆ?
• ಪ್ರಾರ್ಥನೆ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ.ಯೇಸುವಿನ ಬಗ್ಗೆ ನಿಮ್ಮ ನಂಬಿಕೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿ.ನಿಮ್ಮ ಹೃದಯದಲ್ಲಿ ಭಾರವಿರುವ ವಿಷಯಗಳ ಬಗ್ಗೆ ದೇವರೊಂದಿಗೆ ಮಾತನಾಡಿ.ನೀವು ಎದುರಿಸುತ್ತಿರುವ ಕಷ್ಟಕರ ಸನ್ನಿವೇಶಗಳ ಮಧ್ಯೆ ಅವರ ಉಪಸ್ಥಿತಿಯನ್ನು ನೋಡಲು ಮತ್ತು ಅನುಭವಿಸಲು ಸಹಾಯಕ್ಕಾಗಿ ಅವರನ್ನು ಕೇಳಿ.
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್ಸೈಡ್-ಡೌನ್ ಕಿಂಗ್ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್ರತಿಫಲಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಇದು ಭಾಗವಹಿಸುವವರಿಗೆ ಯೇಸುವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಲೇಖಕರ ಅದ್ಭುತ ಸಾಹಿತ್ಯ ವಿನ್ಯಾಸ ಮತ್ತು ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳುತ್ತದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಪ್ರಾಜೆಕ್ಟ್ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleproject.com/Kannada
ವೈಶಿಷ್ಟ್ಯದ ಯೋಜನೆಗಳು

The Way of St James (Camino De Santiago)

The Making of a Biblical Leader: 10 Principles for Leading Others Well

Live Like Devotional Series for Young People: Daniel

Prayer Altars: Embracing the Priestly Call to Prayer

Here Am I: Send Me!

Journey Through Jeremiah & Lamentations

Journey Through Proverbs, Ecclesiastes & Job

Sickness Can Draw You and Others Closer to God, if You Let It – Here’s How

How Stuff Works: Prayer
