BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳಮಾದರಿ

ಎಫೆಸದಲ್ಲಿ ಕೋಲಾಹಲ ಮುಗಿದ ನಂತರ, ವಾರ್ಷಿಕ ಪಂಚಾಶತ್ತಮ ಹಬ್ಬದ ಸಮಯದಲ್ಲಿ ಪೌಲನು ಜೆರುಸಲೇಮಿಗೆ ಹಿಂದಿರುಗಲು ಹೊರಟನು. ದಾರಿಯಲ್ಲಿ, ಸುವಾರ್ತೆಯನ್ನು ಸಾರಿಸಲು ಮತ್ತು ಯೇಸುವಿನ ಹಿಂಬಾಲಕರನ್ನು ಪ್ರೋತ್ಸಾಹಿಸಲು ಅವನು ಅನೇಕ ನಗರಗಳಿಗೆ ಪ್ರಯಾಣಿಸುತ್ತಾನೆ. ಇದರಲ್ಲಿ, ಪೌಲ ಮತ್ತು ಯೇಸುವಿನ ಸೇವೆಯ ನಡುವೆ ಒಂದು ಸಮಾನಾಂತರವನ್ನು ನಾವು ನೋಡುತ್ತೇವೆ. ಯೇಸು ವಾರ್ಷಿಕ ಯಹೂದಿ ಹಬ್ಬಕ್ಕಾಗಿ (ಅವನ ವಿಷಯದಲ್ಲಿ, ಪಸ್ಕ) ಯೆರುಸಲೇಮಿಗೆ ಹೊರಟರು ಮತ್ತು ದಾರಿಯುದ್ದಕ್ಕೂ ತನ್ನ ರಾಜ್ಯದ ಸುವಾರ್ತೆಯನ್ನು ಸಾರಿದರು. ಶಿಲುಬೆ ತನಗಾಗಿ ಕಾಯುತ್ತಿದೆ ಎಂದು ಯೇಸುವಿಗೆ ತಿಳಿದಿದ್ದಂತೆಯೇ, ರಾಜಧಾನಿಯಲ್ಲಿ ಕಷ್ಟಗಳು ಮತ್ತು ಸಂಕಟಗಳು ತನಗಾಗಿ ಕಾಯುತ್ತಿವೆ ಎಂದು ಪೌಲನಿಗೂ ತಿಳಿದಿದೆ. ಆದ್ದರಿಂದ ಈ ತಿಳುವಳಿಕೆಯಿಂದ,ಆತನು ಒಂದು ವಿದಾಯ ಕೂಟವನ್ನು ಯೋಜಿಸಿದ್ದಾನೆ. ಹತ್ತಿರದ ನಗರದಲ್ಲಿ ತನ್ನನ್ನು ಭೇಟಿಯಾಗಲು ಅವರು ಎಫೆಸದಿಂದ ಯಾಜಕರನ್ನು ಆಹ್ವಾನಿಸುತ್ತಾರೆ,ಅಲ್ಲಿಂದ ಅವರು ಹೋದ ನಂತರ ವಿಷಯಗಳು ಕಠಿಣವಾಗುತ್ತವೆ ಎಂದು ಎಚ್ಚರಿಸುತ್ತಾರೆ. ಅವರು ಅಗತ್ಯವಿರುವವರಿಗೆ ಉದಾರವಾಗಿ ಸಹಾಯ ಮಾಡಲು ಜಾಗರೂಕರಾಗಿರಬೇಕು ಮತ್ತು ಅವರ ದೇವಾಲಯಗಳನ್ನು ಶ್ರದ್ಧೆಯಿಂದ ರಕ್ಷಿಸಿ ಪೋಷಿಸಬೇಕು ಎಂದು ಅವರು ಹೇಳುತ್ತಾರೆ. ಪೌಲನಿಗೆ ವಿದಾಯ ಹೇಳಬೇಕಾಗಿರುವುದಕ್ಕಾಗಿ ಎಲ್ಲರು ಬಹಳ ದುಃಖಿತರಾಗಿರುವರು. ಅವರು ಅಳುತ್ತಾ, ತಬ್ಬಿಕೊಳ್ಳುತ್ತಾ ಮತ್ತು ಚುಂಬಿಸುತ್ತಾ ಅವನು ಹೊರಡುವ ಹಡಗು ಅಲ್ಲಿರುವವರೆಗೂ ಅವನಿಂದ ದೂರವಾಗಲೇ ಇಲ್ಲ.
ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ :
• ಅಪೊಸ್ತಲರ ಕೃತ್ಯಗಳ 20:23 ಯಲ್ಲಿ ಪೌಲನ ಮಾತುಗಳನ್ನು ಪೌಲನು ಎದ್ದಿದ್ದ ಯೇಸುವನ್ನು ಮೊದಲ ಬಾರಿ ಎದುರಿಸಿದಾಗ ಪವಿತ್ರ ಆತ್ಮರು ಅನನಿಯನೊಂದಿಗೆ ಮಾತಾಡಿದ ಪದಗಳೊಂದಿಗೆ(ಕೃತ್ಯಗ 9:15-16 ನೋಡಿ)ಹೋಲಿಸಿ. ಈ ಎರಡು ವಚನಗಳನ್ನು ನೀವು ಹೋಲಿಸಿದಾಗ ಮತ್ತು ವ್ಯತಿರಿಕ್ತವಾಗಿರುವಾಗ ನೀವು ಯಾವ ಪ್ರಶ್ನೆಗಳು, ಒಳನೋಟಗಳು ಅಥವಾ ತೀರ್ಮಾನಗಳನ್ನು ಹೊಂದಿದ್ದೀರಿ?
• ಪೌಲನ ವಿದಾಯ ಮಾತುಗಳನ್ನು ಓದಿ (20: 18-35ನೋಡಿ ). ನೀವು ಏನು ಗಮನಿಸುತ್ತೀರಿ? ಆರಂಭಿಕ ದೇವಾಲಯಗಳ ನಾಯಕರನ್ನು ಅವನು ಹೇಗೆ ಪ್ರೋತ್ಸಾಹಿಸುತ್ತಾನೆ, ಎಚ್ಚರಿಸುತ್ತಾನೆ ಮತ್ತು ಕಳಿಸುತ್ತಾನೆ? ಪೌಲನು ಸೂಚಿಸಿದಂತೆ ಎಲ್ಲಾ ನಾಯಕರು ಮುನ್ನಡೆಸಿದರೆ ಏನಾಗುತ್ತದೆ ಎಂದು ನೀವು ಯೋಚಿಸುತ್ತೀರಿ? ಇಂದು ಪೌಲನು ಸೂಚನೆಗಳಿಗೆ ನೀವು ಪ್ರಾಯೋಗಿಕವಾಗಿ ಹೇಗೆ ಪ್ರತಿಕ್ರಿಯಿಸಬಹುದು?
• ಯೇಸು ಯೆರೂಸಲೇಮಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ, ಅಲ್ಲಿ ಅವರಿಗೆ ಕಾಯುತ್ತಿದ್ದ ಯಾತನೆಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ ಮತ್ತು ಅವರ ಕಷ್ಟಗಳು ತಿಳಿದುಬಂದಾಗ ದೂರವಾಗಿದ್ದರು. ಆದರೆ ಪೌಲನು ರಾಜಧಾನಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ, ಎಲ್ಲರಿಗೂ ಏನು ಬರಲಿದೆ ಎಂದು ತಿಳಿದಿತ್ತು ಮತ್ತು ಅವನನ್ನು ಪೂರ್ಣ ಹೃದಯದಿಂದ ಬೆಂಬಲಿಸಿದನು. ಶಿಷ್ಯರ ವಾತ್ಸಲ್ಯ ಮತ್ತು ಬೆಂಬಲದಿಂದ ಪೌಲನು ಹೇಗೆ ಪ್ರಭಾವಿತನಾಗಿದ್ದಾನೆ ಎಂದು ನೀವು ಭಾವಿಸುತ್ತೀರಿ? ಇಂದು ನೀವು ಯಾರನ್ನು ಬೆಂಬಲಿಸಬಹುದು?
• ನಿಮ್ಮ ಓದುವಿಕೆ ಮತ್ತು ಪ್ರತಿಫಲನಗಳು ಒಂದು ಪ್ರಾರ್ಥನೆಯನ್ನು ಪ್ರೇರೇಪಿಸಲಿ. ಯೆರೂಸಲೇಮಿಗೆ ಹೋಗಿ ನಿಮ್ಮ ಸಲುವಾಗಿ ಬಳಲುತ್ತಿರುವ ಯೇಸುವಿಗೆ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ. ನಿಮಗಾಗಿ ಮತ್ತು ನಿಮ್ಮ ನಗರದದೇವಾಲಯ ಮುಖಂಡರಿಗೆ ಅವರ ಉದಾರವಾದ ಸ್ವಯಂ ತ್ಯಾಗದ ಮಾರ್ಗಗಳಲ್ಲಿ ಸೇರಲು ಪ್ರಾರ್ಥಿಸಿ. ಈ ವಾರ ನಿಮ್ಮ ಸಮುದಾಯದೊಂದಿಗೆ ಅವರ ಅನುಗ್ರಹ ಮತ್ತು ಬೆಂಬಲವನ್ನು ನೀವು ಹೇಗೆ ಪ್ರಾಯೋಗಿಕವಾಗಿ ಹಂಚಿಕೊಳ್ಳಬಹುದು ಎಂಬುದರ ಕುರಿತು ನಿಮಗೆ ಕಲ್ಪನೆಯನ್ನು ನೀಡಲು ಅವರನ್ನು ಕೇಳಿ. ಮನಸ್ಸಿಗೆ ಬರುವ ವಿಚಾರಗಳನ್ನು ಬರೆಯಿರಿ ಮತ್ತು ಅದರಂತೆ ಜೀವಿಸಿ.
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್ಸೈಡ್-ಡೌನ್ ಕಿಂಗ್ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್ರತಿಫಲಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಇದು ಭಾಗವಹಿಸುವವರಿಗೆ ಯೇಸುವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಲೇಖಕರ ಅದ್ಭುತ ಸಾಹಿತ್ಯ ವಿನ್ಯಾಸ ಮತ್ತು ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳುತ್ತದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಪ್ರಾಜೆಕ್ಟ್ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleproject.com/Kannada
ವೈಶಿಷ್ಟ್ಯದ ಯೋಜನೆಗಳು

The Way of St James (Camino De Santiago)

The Making of a Biblical Leader: 10 Principles for Leading Others Well

Live Like Devotional Series for Young People: Daniel

Prayer Altars: Embracing the Priestly Call to Prayer

Here Am I: Send Me!

Journey Through Jeremiah & Lamentations

Journey Through Proverbs, Ecclesiastes & Job

Sickness Can Draw You and Others Closer to God, if You Let It – Here’s How

How Stuff Works: Prayer
