ನನಗೆ ಆಜ್ಞಾಪಿಸು - ಶೂನ್ಯ ಸಮ್ಮೇಳನಮಾದರಿ

ಮಹತ್ವದ ತಿರುವು
ಭಯವು ನಂಬಿಕೆಯನ್ನು ಸಂಧಿಸಿದಾಗ
"ಆದರೆ ಅವನು ಗಾಳಿಯನ್ನು ನೋಡಿದಾಗ, ಅವನು ಭಯಪಟ್ಟನು ಮತ್ತು ಮುಳುಗಲು ಪ್ರಾರಂಭಿಸಿದಾಗ, 'ಕರ್ತನೇ, ನನ್ನನ್ನು ರಕ್ಷಿಸು' ಎಂದು ಕೂಗಿದನು." ಈ ಪ್ರಮುಖ ಕ್ಷಣವು ನಮಗೆ ಭಯ ಮತ್ತು ನಂಬಿಕೆಯನ್ನು ಕುರಿತು ಆಳವಾದ ಸಂಗತಿಯನ್ನು ಕಲಿಸುತ್ತದೆ. ಗಾಳಿಯು ತಕ್ಷಣವೇ ಬಲಗೊಳ್ಳಲಿಲ್ಲ ಎಂಬುದನ್ನು ಗಮನಿಸಿ. ಪೇತ್ರನು ಕೇವಲ ಯೇಸುವಿಗಿಂತ ಅದನ್ನು ಕುರಿತು ಹೆಚ್ಚು ಅರಿವುಳ್ಳವನಾದನು.
ಮೂಲ ಪಠ್ಯದಲ್ಲಿ "ನೋಡಿದನು" ಎಂಬ ಪದವು ಕೇವಲ ದೃಶ್ಯ ವೀಕ್ಷಣೆಗಿಂತ ಹೆಚ್ಚಿನ ಸಂಗತಿಯನ್ನು ಸೂಚಿಸುತ್ತದೆ; ಪೇತ್ರನು ಗಾಳಿಯನ್ನು ಹೆಚ್ಚಾಗಿ ಪರಿಗಣಿಸಲು, ಆಲೋಚಿಸಲು ಮತ್ತು ಪ್ರಾಮುಖ್ಯತೆ ಕೊಡಲು ಪ್ರಾರಂಭಿಸಿದನು ಎಂದು ಅದು ಸೂಚಿಸುತ್ತದೆ. ಗಮನವಿಡುವುದರಲ್ಲಿನ ಈ ಬದಲಾವಣೆಯು ತಕ್ಷಣದ ಫಲಿತಾಂಶಗಳನ್ನು ಕೊಟ್ಟಿತು: ಭಯವು ನಂಬಿಕೆಯ ಸ್ಥಳವನ್ನು ತೆಗೆದುಕೊಂಡಿತು ಮತ್ತು ಮುಳುಗುವಿಕೆಯು ನಡಿಗೆಯ ಸ್ಥಳವನ್ನು ತೆಗೆದುಕೊಂಡಿತು.
ಆದರೆ ಪೇತ್ರನ ಮುಳುಗುವಿಕೆಯಲ್ಲಿಯೂ ಸೌಂದರ್ಯವಿದೆ. ಅವನ ಕೂಗು, "ಕರ್ತನೇ, ನನ್ನನ್ನು ರಕ್ಷಿಸು!" ಎಂಬುದು ಆಂಗ್ಲ ಭಾಷೆಯಲ್ಲಿ ಕೇವಲ ಮೂರು ಪದಗಳಾಗಿತ್ತು (ಮತ್ತು ಗ್ರೀಕ್ನಲ್ಲಿ ಇನ್ನೂ ಚಿಕ್ಕದಾಗಿದೆ), ಆದರೂ ಪೇತ್ರನು ತನ್ನ ಬಿಕ್ಕಟ್ಟಿನ ಕ್ಷಣದಲ್ಲಿ ಯಾವ ಕಡೆಗೆ ತಿರುಗಬೇಕೆಂದು ನಿಖರವಾಗಿ ತಿಳಿದಿದ್ದನು ಎಂಬುದನ್ನು ಇದು ತೋರಿಸುತ್ತದೆ. ಅವನ ಪ್ರಾರ್ಥನೆಯ ಸಂಕ್ಷಿಪ್ತತೆಯು ಹತಾಶ ಕ್ಷಣಗಳಲ್ಲಿ ಅಲಂಕಾರಿಕ ಪದಗಳ ಅಗತ್ಯವಿಲ್ಲ ಎಂದು ನಮಗೆ ನೆನಪಿಸುತ್ತದೆ - ಯೇಸುವಿನ ಕಡೆಗೆ ತಿರುಗುವ ಕೇವಲ ಪ್ರಾಮಾಣಿಕ ಹೃದಯವು ಬೇಕಾಗಿದೆ.
ಪ್ರಾರ್ಥನೆಯ ಅಂಶಗಳು:
ನಿಮ್ಮನ್ನು ತಡೆಹಿಡಿದಿರುವ ಭಯಗಳು ಯಾವುವು?
ನೀವು ಮುಳುಗಲು ಪ್ರಾರಂಭಿಸಿದಾಗ ನೀವು ಎಷ್ಟು ಬೇಗನೆ ಯೇಸುವನ್ನು ಕೂಗುತ್ತೀರಿ?
ಭಯದ ಸಮಯದಲ್ಲಿ ನಿಮ್ಮ ನಂಬಿಕೆಯನ್ನು ಬಲಪಡಿಸುವಂತೆ ದೇವರನ್ನು ಬೇಡಿಕೊಳ್ಳಿರಿ.
ನೀವು ಮುಳುಗಲು ಪ್ರಾರಂಭಿಸಿದಾಗ ಅದನ್ನು ಗುರುತಿಸಲು ವಿವೇಚನೆಗಾಗಿ ಪ್ರಾರ್ಥಿಸಿ.
ಪ್ರಾಯೋಗಿಕ ಚಟುವಟಿಕೆ:
ಭಯ-ನಂಬಿಕೆಯ ಸಂಯೋಜಿಸುವ ಕಾರ್ಯಾಚರಣೆ:
1. ಎರಡು ಅಂಕಣಗಳನ್ನು ರಚಿಸಿ:
ಭಯದ ಅಂಕಣ: ನಿಮ್ಮ ಪ್ರಸ್ತುತ ಭಯಗಳನ್ನು ಪಟ್ಟಿ ಮಾಡಿ.
ನಂಬಿಕೆಯ ಅಂಕಣ: ಪ್ರತಿಯೊಂದು ಭಯವನ್ನು ಎದುರಿಸುವ ದೇವರ ವಾಕ್ಯದಿಂದ ಸತ್ಯವನ್ನು ಬರೆಯಿರಿ.
2. ನಿಮ್ಮ ದಿನದಾದ್ಯಂತ ಈ ಪಟ್ಟಿಯನ್ನು ಲಭ್ಯವಾಗಿ ಇಟ್ಟುಕೊಳ್ಳಿರಿ.
ಅವಲೋಕನದ ಪ್ರಶ್ನೆಗಳು:
ಪೇತ್ರನನ್ನು ರಕ್ಷಿಸುವುದಕ್ಕೆ ಮೊದಲು ಸ್ವಲ್ಪ ಮುಳುಗಲು ಯೇಸು ಅನುಮತಿಸಿದ್ದನ್ನು ಕುರಿತು ನೀವು ಏನು ಆಲೋಚಿಸುತ್ತೀರಿ?
ಪೇತ್ರನ ಕೂಗಿಗೆ ಯೇಸು ಬೇಗನೆ ಪ್ರತಿಕ್ರಿಯಿಸಿದ್ದನ್ನು ಕುರಿತು ನಾವೇನು ಕಲಿಯಬಹುದು?
ನಿಮ್ಮನಂಬಿಕೆಯನ್ನುಬಲಪಡಿಸಲುದೇವರುನಿಮ್ಮಹಿಂದಿನಭಯದಕ್ಷಣಗಳನ್ನುಹೇಗೆಉಪಯೋಗಿಸಿದ್ದಾನೆ?
ಈ ಯೋಜನೆಯ ಬಗ್ಗೆ

"ನನಗೆ ಆಜ್ಞಾಪಿಸು." ಈ ಎರಡು ಪದಗಳು ಪೇತ್ರನ ಜೀವಿತವನ್ನು ಬಿರುಗಾಳಿಯಿಂದ ಅಲುಗಾಡುತ್ತಿದ್ದ ದೋಣಿಯಿಂದ ಕೆರಳಿದ ನೀರಿನ ಮೇಲೆ ಹೆಜ್ಜೆ ಹಾಕಿದನು. ದೋಣಿಯಿಂದ ಯೇಸುವಿನ ಕಡೆಗೆ ಅವನ ಪ್ರಯಾಣವು ನಂಬಿಕೆ, ಗಮನ ಮತ್ತು ಮಹತ್ವದ ತಿರುವು ಕಾಲಾತೀತ ಸತ್ಯಗಳನ್ನು ಪ್ರಕಟಿಸುತ್ತದೆ. ಈ 4-ದಿನದ ಧ್ಯಾನವು ಮತ್ತಾಯ 14:28-33 ನ್ನು ಅನ್ವೇಷಿಸುತ್ತದೆ, ಯೇಸುವಿನ ಕರೆಯನ್ನು ಗುರುತಿಸಲು, ನಂಬಿಕೆಯಿಂದ ಭಯವನ್ನು ಜಯಿಸಲು ಮತ್ತು ಆತನ ಮೇಲೆ ಅಚಲವಾದ ದೃಷ್ಟಿಯನ್ನು ಕಾಪಾಡಿಕೊಳ್ಳಲು ನಿಮಗೆ ಮಾರ್ಗದರ್ಶನ ಕೊಡುತ್ತದೆ. ನೀವು ನಿಮ್ಮ ದೋಣಿಯ ಅಂಚಿನಲ್ಲಿದ್ದರೂ ಅಥವಾ ನೀರಿನ ಮೇಲೆ ನಡೆಯಲು ಕಲಿಯುತ್ತಿದ್ದರೆ, ಸಾಮಾನ್ಯ ವಿಶ್ವಾಸಿಗಳು "ನನಗೆ ಆಜ್ಞಾಪಿಸು" ಎಂದು ಹೇಳಲು ಧೈರ್ಯಮಾಡಿದಾಗ ಏನಾಗುತ್ತದೆ ಎಂಬುದನ್ನು ಕಂಡುಕೊಳ್ಳಿರಿ
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Zero ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: www.zeroconferences.com/india
ವೈಶಿಷ್ಟ್ಯದ ಯೋಜನೆಗಳು

Why Money Stress Proves You're Thinking Too Small

21 Days of Prayer & Fasting

365 BIBLE

Don’t Make It Happen: Understanding the Purpose and Beauty of Every Season

New Attitudes for a New Year

Living God's Promise in the Present

Vessels Unto Honour

Rich in Love: Growing Financial Peace Together

Christmas Starts Here — Living the Spirit of Emmanuel
